19th June 2025
ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿಯಲ್ಲಿ ಮಂಗಳವಾರ ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಹಿಮೋಗ್ಲೋಬಿನ್(ರಕ್ತ) ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ (ಆರ್ಬಿಎಸ್ಕೆ) ವೈದ್ಯಾಧಿಕಾರಿ ಡಾ.ಆಯ್ ಎಂ ಬಿರಾದಾರ ಮಾತನಾಡಿ ಮಕ್ಕಳಿಗೆ ರಕ್ತಹೀನತೆಯ ಕುರಿತು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು.
ಅನೇಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಹಾಗೂ ಯಾವುದೆ ಸರಕಾರಿ ಆರೋಗ್ಯ ಯೋಜನೆಗಳಾಗಲಿ ಸರಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಸಿಮಿತಗೋಳಿಸದೆ ಖಾಸಗಿ ಹಾಗೂ ಸರಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ಚಡಚಣದ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ.
ಡಾ.ಸಂಗೀತಾ ಕಡಕೋಳ,ಶುಶ್ರೂಷಕಿ ಉಮಾಶ್ರೀ ಸುತಾರ ಹಾಗೂ ಶಾಲೆಯ ಮುಖ್ಯ ಗುರುಗಳು ಮಹಾಂತೇಶ ಉಮರಾಣಿ, ಶಿಕ್ಷಕ ಬಸವರಾಜ ಕರಜಗಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು